ಯಾರು ತನಿಖೆ ನಡೆಸಿದರೂ ಸತ್ಯ ಬದಲಾಗದು ಎಂದ ರಿಯಾ ಚಕ್ರವರ್ತಿ

Spread the love

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶವಿತ್ತ ಬೆನ್ನಲ್ಲೇ, ಸುಶಾಂತ್‌ ಪ್ರೇಯಸಿ ರಿಯಾ ಚಕ್ರವರ್ತಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ರಿಯಾ ನೀಡಿರುವ ಹೇಳಿಕೆಯನ್ನು ತಿಳಿಸಿರುವ ವಕೀಲರು ʼಇದುವರೆಗೆ ಮುಂಬೈ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ತನಿಖೆಯಲ್ಲಿ ಸಹಕರಿಸಿದಂತೆಯೇ ಮುಂದೆ ಕೂಡ ರಿಯಾ ಸಹಕರಿಸಲಿದ್ದಾರೆ. ಯಾರು ತನಿಖೆ ನಡೆಸಿದರೂ ಸತ್ಯ ಬದಲಾಗುವುದಿಲ್ಲ. ರಿಯಾ ಕೂಡ ಸಿಬಿಐ ತನಿಖೆಗೆ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಸುಪ್ರೀಂ ಕೋರ್ಟ್‌ ನಿರ್ಧಾರ ರಿಯಾ ಅವರಿಗೂ ಸಂತಸ ತಂದಿದೆ ಎಂದು ಲಾಯರ್‌ ಸತೀಶ್‌ ಮಾನೆಶಿಂದೆ ಹೇಳಿದ್ದಾರೆ.

ಇದಕ್ಕೂ ಮುನ್ನ ಸುಪ್ರೀಂ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ ಸುಶಾಂತ್‌ ಸಂಬಂಧಿಯಾದ ನೂತನ್‌ ಸಿಂಗ್‌, ಭಗವಂತನ ದೇಗುಲದಲ್ಲಿ ಯಾವುದೇ ಭಯವಿಲ್ಲ. ಸತ್ಯಕ್ಕೆ ಸೋಲಿಲ್ಲ. ಹಾಗಾಗಿ ದೇಗುಲದಂತೆ ಇರುವ ಸುಪ್ರೀಂನಿಂದ ಬಂದ ಆದೇಶ ಸ್ವಾಗತಾರ್ಹ ಎಂದು ಹೇಳಿಕೊಂಡಿದ್ದರು.


Spread the love

Leave a Reply

Your email address will not be published. Required fields are marked *