Thursday, May 15, 2025
  • About Us
  • Contact Us
  • Privacy Policy
Just 5 Kannada
No Result
View All Result
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
No Result
View All Result
Morning News
No Result
View All Result
Home Featured

ಗಣೇಶ ಕೇವಲ ದೇವರಲ್ಲ…

News Desk by News Desk
August 22, 2020
in Featured, ಲೇಖನ
0
0
SHARES
0
VIEWS
Share on FacebookShare on Twitter

READ ALSO

ಮಾರ್ಚ್ ತಿಂಗಳ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳ ಪಟ್ಟಿ

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

ಹಿಂದೂ ಪರಂಪರೆಯೇ ಹಾಗೆ. ಮಾನವನಲ್ಲಿಲ್ಲದ ಅಪೇಕ್ಷಣೀಯ ಅಮಾನುಷ ವ್ಯಕ್ತಿತ್ವವನ್ನು ಲೀಲಾಮಾನುಷವಾಗಿ ಚಿತ್ರಿಸಿ, ಅದಕ್ಕೆ ದೇವರ ಸ್ವರೂಪ ನೀಡುವುದಲ್ಲದೇ, ಪ್ರಾಣಪ್ರತಿಷ್ಠೆಯ ಮೂಲಕ ಕಲ್ಲನ್ನು ದೇವರನ್ನಾಗಿಸುವುದು ಯಾ ದೇವರನ್ನು ಕಲ್ಲಾಗಿಸುವುದು. ಅದು ನೋಡುಗನ ‘ಕಾಣ್ಕೆ’ಗೆ ತಕ್ಕಂತೆ ಮತ್ತು ಜಲಗಾರನಿಗೆ ದೇವರು ಕಂಡಂತೆ!!
ಚರಾಚರ ಪ್ರಪಂಚದಲ್ಲೆಲ್ಲಾ ದೇವರನ್ನು ಕಂಡ ಸಂಸ್ಕೃತಿಯಲ್ಲಿ, ಮಣ್ಣಿನ ಮೂರ್ತಿಗೆ ಗಣೇಶನ ಆಕೃತಿ ಕೊಡುವುದು ಕಷ್ಟವೆನಿಸಲಿಲ್ಲ. ಆದರೆ ಈ ರೂಪ ಗಣೇಶನಿಗೆ ಮಾತ್ರ ಒಲಿದಿರುವುದು ಇಂದಿಗೂ ಆಶ್ಚರ್ಯಕರ. ತಿಲಕರಿಂದ ಆರಂಭಗೊಂಡ ಗಣೇಶೋತ್ಸವ, ಗಲ್ಲಿಗಲ್ಲಿಯ ಶೋಕಿಯಾಗಿ ಪರಿಣಮಿಸಿದ ಈ ಕಾಲಕ್ಕೂ, ಆಸ್ತಿಕ ಸಮುದಾಯದಲ್ಲಿ ಸದುದ್ದೇಶದ ಭಗವಂತನನ್ನೇ ಸ್ಥಾಪಿಸಿರುವುದು ಸುಳ್ಳಲ್ಲ. ಹಾಗಾದರೆ ಆ ಭಗವಂತನ ಸ್ವರೂಪವನ್ನೊಮ್ಮೆ ‘ಕಾಣೋಣ’ ಬನ್ನಿ.
ಆದಿವಂದಿತನಿಗೆ ವಂದಿಸುವ ಪರಿಪಾಠ ಭಾರತೀಯರೆಲ್ಲರ ಪರಂಪರೆಯ ಭಾಗವಾಗಿಯೇ ಬಂದಿದ್ದರೂ, ಚತುರ್ಥಿಯ ಆಚರಣೆಯೊಂದು ವಿಶಿಷ್ಟ ಕೊಂಡಿಯಾಗಿ ಇದಕ್ಕೆ ತಳುಕು ಹಾಕಿಕೊಂಡಿದೆ. ಇದೊಂದು ಪಂಚಭೂತಗಳನ್ನು ನೆನೆಯುವ ಪರಮಾತ್ಮ ಪ್ರಕ್ರಿಯೆ ಎಂದರೆ ತಪ್ಪಾಗಲಾರದು.
‘ಪೃಥ್ವಿ’ಯ ಸಾರಸದೃಶ ಮಣ್ಣನ್ನು ತಂದು, ನೀರಿನಲ್ಲಿ ಹದ ಬರಿಸಿ, ‘ಗಾಳಿ’ಯಲ್ಲಿ ಕರಗಬಹುದಾದ ಮಾತುಗಳಿಗೆ ‘ಮನನಾತ್ ತ್ರಾಯತೇ ಇತಿ ಮಂತ್ರ:’ ಎನ್ನುವ ‘ಅಗ್ನಿ’ರೂಪಿಯಾದ ತೇಜೋಮಯ ಪ್ರಾಣಪ್ರತಿಷ್ಠೆ ಮಾಡಿ, ‘ಉದಕ’ದಲ್ಲಿ ನೆನೆಸುವ, ಕೊನೆಗೆ ಚೌತಿಚಂದ್ರನ ನೋಡಲೇಬಾರದ ಅನಿವಾರ್ಯತೆಗೆ ಕಟ್ಟುಬಿದ್ದು ‘ಆಕಾಶ’ದ ಚಿಂತನೆಯಲ್ಲೇ ಮನೆಗೆ ಮರಳುವ, ಪಂಚಭೂತಗಳ ಸಮ್ಮಿಲನ ಪ್ರಕ್ರಿಯೆ ಈ ಗಣೇಶ ಚತುರ್ಥಿ.
ಪಂಚಭೂತಗಳಲ್ಲಿ ದೇವರನ್ನು ಕಾಣುವ ಬಗೆಯನ್ನು ಪೂರ್ವಿಕರು ಕಾಣಿಸಿಕೊಟ್ಟ ಬಗೆಯಿದು. ಅದಲ್ಲದೇ ಮೂಷಿಕ, ಹಸ್ತಿ, ಉರಗವೆಂಬ ಪ್ರಾಣಿಸಂಕುಲಗಳೂ ಗಣಪತಿಯ ಸಹಚರರಾಗಿರುವುದು, ಮಾನವ ಮತ್ತು ಸಹಜೀವಿಗಳ ಸೌಖ್ಯ – ಸಖ್ಯದಿಂದ ಎನ್ನುವುದನ್ನು ಸಾದರಪಡಿಸಿದ ಬಗೆ. 
ಶಿವ ಪಾರ್ವತಿಯ ಪ್ರಕರಣದಲ್ಲಾಗಲೀ, ಕುಬೇರನ ಆತಿಥ್ಯ ಪ್ರಕರಣದಿಂದಾಗಲೀ, ಚಂದ್ರ, ಬಾದರಾಯಣ, ರಾವಣ, ಇತ್ಯಾದಿ ಎಲ್ಲಾ ಪ್ರಕರಣದಲ್ಲೂ ಸುಮುಖನಿಗೆ ಗರ್ವಭಂಗದ ಖ್ಯಾತಿ ಸಲ್ಲಬೇಕು. ಅರ್ಥವಿಷ್ಟೇ! ದೇವರಾಗುವವನು ಆನೆಯ ಮದ, ಹೊಟ್ಟೆಯ ನಂಜು, ಮೂಷಿಕನ ಕುಟಿಲತೆ ಎಲ್ಲವನ್ನೂ ಮೆಟ್ಟಿನಿಲ್ಲುವ ಸಲುವಾಗಿ ಸಿದ್ಧಿ, ಬುದ್ಧಿಯರ ( ಗಣೇಶನ ಪತ್ನಿಯರ ಹೆಸರು) ಕೈ ಹಿಡಿಯಬೇಕು ಎನ್ನುವುದು ತಾತ್ಪರ್ಯ.
ಹಾಗಾಗಿ ಎಲಿಫೆಂಟು ಹೆಡ್ಡಿನ, ಹಾವಿನ ಬೆಲ್ಟಿನ, ಡೊಳ್ಳುಹೊಟ್ಟೆಯ, ರ್ಯಾಟ್‌ ರೈಡರ್ ಎನ್ನುವ, ಏಕದಂತನನ್ನು ಕಾಣುವಾಗ ಯಾರ್ಯಾರೋ ಹೇಳುವಂತೆ ಕೇವಲ ಗಣೇಶನಾಗಿ ನಮ್ಮ ದೇವರು ಕಾಣುವುದಿಲ್ಲ. ಬದಲಾಗಿ ಕೈಯೆತ್ತಿ ಮುಗಿದು,
“ಪಾಣಿಪಂಚೆ, ಮುತ್ತಿನುಂಡೆ, ಹೊನ್ನಘಂಟೆ, ಒಪ್ಪುವಾ ವಿಘ್ನೇಶ ದೇವರಿಗೆ ಇಪ್ಪತ್ತೊಂದು ನಮಸ್ಕಾರಗಳು” ಎಂದು ಕರೆಯಬೇಕೆನಿಸುತ್ತದೆ. 
ಇಷ್ಟೆಲ್ಲಾ ಹೇಳುವಾಗ ಇದೊಂದು ಅಪಕಲ್ಪನೆ ಯಾ ವಿಪರೀತ ಕಲ್ಪನೆ ಎಂದೆನಿಸಿದಲ್ಲಿ, ಒಮ್ಮೆ ದೀರ್ಘವಾಗಿ ಹಬ್ಬಗಳ ತಾತ್ಪರ್ಯದ ಬಗ್ಗೆ ಯೋಚಿಸಿ. ನಮ್ಮ- ನಿಮ್ಮ ಹಸಿಮಣ್ಣಿನಂತಹ ಮನದಲ್ಲಿ ಗಣೇಶನ ಮೂರ್ತಿ ಮೂಡಲೂ ಸಾಕು. ಅದು ಮೂಡಿದಲ್ಲಿ, ಗಣಪತಿ ಬಪ್ಪೋ ಮೋರಯ, ಎಂದು ಹೊಳೆಯಲ್ಲಿ ಮುಳುಗಿಸುವ ಬದಲು, ಮತ್ತೊಂದು ಮನೆಗೂ, ಮನಕ್ಕೂ ಗೌರೀಗಣೇಶರನ್ನು ದಾಟಿಸೋಣ…ಏನಂತೀರಿ?
Tags: ganeshagod

Related Posts

ಮಾರ್ಚ್ ತಿಂಗಳ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳ ಪಟ್ಟಿ
ಲೇಖನ

ಮಾರ್ಚ್ ತಿಂಗಳ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳ ಪಟ್ಟಿ

March 1, 2025
ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್
Featured

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

September 25, 2024
ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…
Featured

ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…

September 25, 2024
ನೀವು ನೋಡಲೇಬೇಕಾದ ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳು | The Best Places to visit in South India
Featured

ನೀವು ನೋಡಲೇಬೇಕಾದ ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳು | The Best Places to visit in South India

September 25, 2024
ಬೀದರ್ ಕೋಟೆ । ಐತಿಹಾಸಿಕ ಪರಂಪರೆಯ ಬೀದರ್ | Bidar Fort
Featured

ಬೀದರ್ ಕೋಟೆ । ಐತಿಹಾಸಿಕ ಪರಂಪರೆಯ ಬೀದರ್ | Bidar Fort

September 25, 2024
ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort
Featured

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

September 25, 2024
Next Post
ಕಾರ್ಗಲ್

ಕಾರ್ಗಲ್‌ ಬಳಿ ಅಪಘಾತ

Leave a Reply Cancel reply

Your email address will not be published. Required fields are marked *

POPULAR NEWS

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

September 25, 2024
ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

October 24, 2024

ದೇಶದ ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಣೆಗೆ ಕ್ರಮ

August 13, 2020
World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

September 25, 2024
ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

September 25, 2024

EDITOR'S PICK

ಕೊಪ್ಪಳದಲ್ಲಿ ದೇಶದ ಮೊದಲ ಆಟಿಕೆ ಉತ್ಪಾದನಾ ಕೇಂದ್ರ; ಸಿಎಂ ಕ್ರಮಕ್ಕೆ ಮೋದಿ ಪ್ರಶಂಸೆ

ಕೊಪ್ಪಳದಲ್ಲಿ ದೇಶದ ಮೊದಲ ಆಟಿಕೆ ಉತ್ಪಾದನಾ ಕೇಂದ್ರ; ಸಿಎಂ ಕ್ರಮಕ್ಕೆ ಮೋದಿ ಪ್ರಶಂಸೆ

September 25, 2024
shwetha singh

ಸುಶಾಂತ್‌ ಸಿಂಗ್‌‌ ಹೆಸರಿಗೆ ಕ್ಯಾಲಿಫೋರ್ನಿಯಾದಿಂದ ಗುರುತಿಸುವಿಕೆಯ ಪ್ರಮಾಣಪತ್ರ

August 15, 2020
ಪ್ರಧಾನಿ ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

ಪ್ರಧಾನಿ ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

September 25, 2024
ram ma

ಪ್ರಧಾನಿ ಮೋದಿ ಭಾಷಣಕ್ಕೆ ವ್ಯಂಗ್ಯವಾಡಿದ್ದ ರಾಹುಲ್ ಗಾಂಧಿಗೆ ರಾಮ್ ಮಾಧವ್ ತಿರುಗೇಟು!

August 16, 2020

About

ನಿಮ್ಮ ಧ್ವನಿ ನಮ್ಮ ಕರೆಗೆ ಸೇರುವುದಾದರೆ, ಕರ ಜೋಡಿಸಿ ಸ್ವಾಗತ ಕೋರುತ್ತೇವೆ.
ಇದು ” just 5 ಕನ್ನಡ”

Categories

  • Blog
  • Featured
  • Main Story
  • ಕ್ರೀಡೆ
  • ಟೆಕ್ನಾಲಜಿ
  • ದೇಶ
  • ಪ್ರವಾಸ
  • ರಾಜ್ಯ
  • ಲೇಖನ
  • ಲೈಫ್ ಸ್ಟೈಲ್
  • ವಿಶೇಷ
  • ಸಿನಿಮಾ

Recent Posts

  • ಮಾರ್ಚ್ ತಿಂಗಳ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳ ಪಟ್ಟಿ
  • ಮಾರ್ಚ್ 22ರಂದು ‘ಕರ್ನಾಟಕ ಬಂದ್
  • ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ
  • ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

© 2025 Just 5 Kannada - Premium Website Designers Kalahamsa Infotech.

No Result
View All Result
  • Homepages
    • Home Page 1
    • Home Page 2
  • National
  • Travel
  • Homepages
    • Home Page 1
    • Home Page 2

© 2025 Just 5 Kannada - Premium Website Designers Kalahamsa Infotech.