Thursday, June 12, 2025
  • About Us
  • Contact Us
  • Privacy Policy
Just 5 Kannada
No Result
View All Result
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
No Result
View All Result
Morning News
No Result
View All Result
Home Main Story

ಕೆ.ಜಿ.ಎಫ್‌ 2 ಗೆ ನಡೆದಿದೆ ತಯಾರಿ, ರೈ ಆಗ್ತಾರಾ ದುಬಾರಿ?

News Desk by News Desk
September 25, 2024
in Main Story, ಸಿನಿಮಾ
0
ಕೆ.ಜಿ.ಎಫ್‌ 2 ಗೆ ನಡೆದಿದೆ ತಯಾರಿ, ರೈ ಆಗ್ತಾರಾ ದುಬಾರಿ?
0
SHARES
0
VIEWS
Share on FacebookShare on Twitter

ಬೆಂಗಳೂರು : ಕೆ.ಜಿ.ಎಫ್ ಚಾಪ್ಟರ್-2 ಚಿತ್ರೀಕರಣ ಆರಂಭಗೊಂಡಿದೆ. ಕೆ.ಜಿ.ಎಫ್. ಮೊದಲ ಭಾಗ ಇಡೀ ಭಾರತೀಯ ಸಿನಿಮಾ ರಸಿಕರನ್ನು ಸೆಳೆದಿತ್ತು. ಈ ಸಿನಿಮಾ ಒಂದರಿಂದಲೇ  ಕನ್ನಡದ ಉದಯೋನ್ಮುಖ ನಟ ಯಶ್ ಇಂಡಿಯಾ ಲೆವೆಲ್ಲಿನ ಸ್ಟಾರ್ ಆಗಿಬಿಟ್ಟರು. ನಿರ್ದೇಶಕ ಪ್ರಶಾಂತ್ ನೀಲ್ʼಗೆ ಪರಭಾಷೆಗಳಿಂದ ಮೇಲಿಂದ ಮೇಲೆ ಆಫರ್ ಬರಲು ಶುರುವಾಯಿತು. ಈ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರು. ಚಾಪ್ಟರ್-೨ಗಂತೂ ಇನ್ನೂ ಚಿತ್ರೀಕರಣದ ಹಂತದಲ್ಲೇ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸಂಜಯ್ ದತ್, ರವೀನಾ ಟಂಡನ್ ಇತ್ಯಾದಿ ಬಾಲಿವುಡ್ ಕಲಾವಿದರೂ ಈಗ ಕೆಜಿಎಫ್ ತಂಡ ಸೇರಿಕೊಂಡಿರುವುದು ಚಿತ್ರದ ಸ್ಟಾರ್‌ ವ್ಯಾಲ್ಯೂ ಹೆಚ್ಚಿಸಿದ್ದರೆ, ಪ್ರಕಾಶ್‌ ರೈ ಬರೋಣ ಅಭಿಮಾನಿಗಳನ್ನೂ ವಿರೋಧಿಗಳನ್ನೂ ಏಕಕಾಲಕ್ಕೆ ಹುಟ್ಟುಹಾಕಿದೆ. ಕೆಜಿಎಫ್‌ ಮೊದಲ ಭಾಗ ಕೋಲಾರದಲ್ಲಿ ಶೂಟಿಂಗ್‌ ಮಾಡಲಾಗಿತ್ತು. ಆದರೆ ಚಾಪ್ಟರ್‌-2 ಸೆಟ್‌ ಮಾತ್ರ ಪ್ರಸಿದ್ಧ ಸ್ಥಳವೊಂದರಲ್ಲಿ ಸಿದ್ಧವಾಗಿದೆ.

READ ALSO

ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

ಕೆ.ಜಿ.ಎಫ್ ಚಾಪ್ಟರ್-೨ಗಾಗಿ ಕಂಠೀರವ ಸ್ಟುಡಿಯೋದಲ್ಲಿ ಬೃಹತ್ ಸೆಟ್ ಹಾಕಲಾಗಿದೆ. 1980ರ ದಶಕದ ಕಾಲಘಟ್ಟಕ್ಕೆ ಹೊಂದುವಂತಿರುವ ವಿನ್ಯಾಸ ಇದರದ್ದಾಗಿದೆ. ಇಪ್ಪತ್ತೈದು ದಿನಗಳ ಕಾಲ ಇಲ್ಲಿಯೇ ಶೂಟಿಂಗ್ ನಡೆಯಲಿದೆ. ಪ್ರಕಾಶ್ ರೈ, ಮಾಳವಿಕಾ ಮತ್ತು ನಾಗಾಭರಣ ಭಾಗವಹಿಸಿರುವ ದೃಶ್ಯಗಳ ಚಿತ್ರೀಕರಣವೇ ಹತ್ತು ದಿನಗಳು ಸಾಗಲಿದೆ. ಈ ಹತ್ತು ದಿನಗಳಲ್ಲಿ ಯಶ್ ಭಾಗದ ಯಾವುದೇ ದೃಶ್ಯಗಳಿಲ್ಲದಿರುವುದರಿಂದ ರಾಕಿಂಗ್ ಸ್ಟಾರ್ ಹಾಜರಾತಿ ಇರೋದಿಲ್ಲ. ಉಳಿದ ಹದಿನೈದು ದಿನಗಳ ಚಿತ್ರೀಕರಣದಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎನ್ನುವ ಮಾಹಿತಿ ಸದ್ಯಕ್ಕಿಲ್ಲ.

ಈಗ ಬಂದಿರುವ ಮಾಹಿತಿಯ ಪ್ರಕಾರ ಅನಂತ್ ನಾಗ್ ಅವರ ಜಾಗಕ್ಕೆ ಪ್ರಕಾಶ್ ರೈ ಅವರು ಅವರ ಶಿಷ್ಯನಾಗಿ ಕಥೆ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಕೆ ಜಿ ಎಫ್ ಮೊದಲ ಅಧ್ಯಾಯದಲ್ಲಿ ಇದೇ ಮಾಳವಿಕಾ ಬರಹಗಾರ ಅನಂತ್ (ಸೀನಿಯರ್ ಜರ್ನಲಿಸ್ಟ್ ಆನಂದ್ ಇಂಗಳಗಿ) ಜೊತೆ ಸಂದರ್ಶನ ನಡೆಸುವ ದೃಶ್ಯಗಳಿದ್ದವು. ನಾಗಾಭರಣ ಸಹ ವಾಹಿನಿಯ ಮುಖ್ಯಸ್ಥರಾಗಿ ಕಾಣಿಸಿಕೊಂಡಿದ್ದರು. ಆದರೀಗ ಮಾಳವಿಕಾ ಮತ್ತು ಭರಣ ಇದ್ದು, ಅನಂತ್ ಜಾಗಕ್ಕೆ ಪ್ರಕಾಶ್ ರೈ ಬಂದಿದ್ದಾರೆ ಅನ್ನೋದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಒಂದು ವೇಳೆ ಚಿನ್ನದ ಗಣಿ ಮತ್ತು ಅಲ್ಲಿ ಬೆಂದು ಬಾಳಿದ ಜೀವಗಳ ಕುರಿತಾಗಿ ಮಾತಾಡಲು ಅನಂತ್ ಥರಹವೇ ಮತ್ತೊಬ್ಬ ವಿಶೇಷ ವ್ಯಕ್ತಿಯ ಪಾತ್ರ ಸೃಷ್ಟಿಯಾಗಿದ್ದರೂ ಇರಬಹುದು. ಕೆ.ಜಿ.ಎಫ್ ಬಿಡುಗಡೆಯ ಸಮಯದಲ್ಲಿ ಒಳ್ಳೆಯ ಪಬ್ಲಿಸಿಟಿ ಕಾರಣಕ್ಕೆ ಭಾರತದ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿತ್ತು. ಸಿನಿಮಾ ಕೂಡಾ ಗುಣಮಟ್ಟ ಉಳಿಸಿಕೊಂಡಿದ್ದರಿಂದ ಜನ ಇಷ್ಟ ಪಟ್ಟರು. ಅಂತಿಮವಾಗಿ ಕೆಜಿಎಫ್ ಗೆಲುವು ಕಂಡಿತು. ಈಗ ರೈಗೆ ವಿರೋಧಿಗಳೇ ಹೆಚ್ಚಾಗಿರುವುದರಿಂದ ಎಲ್ಲಡೆ ಸಿನಿಮಾ ನೋಡುವುದಿಲ್ಲ ಎನ್ನುವ ಗುಲ್ಲೂ ಹಬ್ಬಿರುವುದು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಚಿತ್ರ ಗೆದ್ದರೆ ಕನ್ನಡ ಸಿನಿಮಾ ಗೆದ್ದಂತೆ. ಸೋತರೆ ಕಲಾವಿದನೊಬ್ಬ ಸೋತಂತೆ ಎನ್ನುವ ಸ್ಥಿತಿ ಚಿತ್ರತಂಡದ್ದು.

Tags: kgf 2prakash raisetshooting

Related Posts

ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!
Main Story

ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

September 25, 2024
ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್
Featured

ಕನ್ನಡದಲ್ಲಿ ಚುನಾವಣಾ ಕೇಂದ್ರಿತ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಉಚಿತ ವೆಬಿನಾರ್

September 25, 2024
ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…
Featured

ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…

September 25, 2024
ನೀವು ನೋಡಲೇಬೇಕಾದ ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳು | The Best Places to visit in South India
Featured

ನೀವು ನೋಡಲೇಬೇಕಾದ ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳು | The Best Places to visit in South India

September 25, 2024
ಬೀದರ್ ಕೋಟೆ । ಐತಿಹಾಸಿಕ ಪರಂಪರೆಯ ಬೀದರ್ | Bidar Fort
Featured

ಬೀದರ್ ಕೋಟೆ । ಐತಿಹಾಸಿಕ ಪರಂಪರೆಯ ಬೀದರ್ | Bidar Fort

September 25, 2024
ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort
Featured

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

September 25, 2024
Next Post
ಚೆಸ್‌ ಒಲಂಪಿಯಾಡ್‌ನಲ್ಲಿ ಭಾರತಕ್ಕೆ ಐತಿಹಾಸಿಕ ವಿಜಯ

ಚೆಸ್‌ ಒಲಂಪಿಯಾಡ್‌ನಲ್ಲಿ ಭಾರತಕ್ಕೆ ಐತಿಹಾಸಿಕ ವಿಜಯ

Leave a Reply Cancel reply

Your email address will not be published. Required fields are marked *

POPULAR NEWS

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

September 25, 2024
ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

October 24, 2024
World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

September 25, 2024

ದೇಶದ ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಣೆಗೆ ಕ್ರಮ

August 13, 2020
ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

September 25, 2024

EDITOR'S PICK

ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

September 25, 2024
dhoni

ಧೋನಿ ಜೇಬುಗಳ್ಳರಿಗಿಂತ ಚಾಲಾಕಿ ಎಂದ ರವಿಶಾಸ್ತ್ರಿ

August 17, 2020
vishvanath

ಟಿಪ್ಪು ಈ ಮಣ್ಣಿನ ಮಗ ಎಂದ ಬಿಜೆಪಿ ಎಂಎಲ್‌ಸಿ

August 26, 2020

ಕೋವಿಡ್ ಗೆ ರಷ್ಯಾದಲ್ಲಿ ಮೊದಲ ಲಸಿಕೆ ಸಿದ್ಧವಾಗಿರುವುದು ವಿಶ್ವಕ್ಕೆ ಸಂತಸದ ಸುದ್ದಿ- ಡಾ.ಕೆ.ಸುಧಾಕರ್

August 14, 2020

About

ನಿಮ್ಮ ಧ್ವನಿ ನಮ್ಮ ಕರೆಗೆ ಸೇರುವುದಾದರೆ, ಕರ ಜೋಡಿಸಿ ಸ್ವಾಗತ ಕೋರುತ್ತೇವೆ.
ಇದು ” just 5 ಕನ್ನಡ”

Categories

  • Blog
  • Featured
  • Main Story
  • ಕ್ರೀಡೆ
  • ಟೆಕ್ನಾಲಜಿ
  • ದೇಶ
  • ಪ್ರವಾಸ
  • ರಾಜ್ಯ
  • ಲೇಖನ
  • ಲೈಫ್ ಸ್ಟೈಲ್
  • ವಿಶೇಷ
  • ಸಿನಿಮಾ

Recent Posts

  • ಮಾರ್ಚ್ ತಿಂಗಳ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳ ಪಟ್ಟಿ
  • ಮಾರ್ಚ್ 22ರಂದು ‘ಕರ್ನಾಟಕ ಬಂದ್
  • ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ
  • ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

© 2025 Just 5 Kannada - Premium Website Designers Kalahamsa Infotech.

No Result
View All Result
  • Homepages
    • Home Page 1
    • Home Page 2
  • National
  • Travel
  • Homepages
    • Home Page 1
    • Home Page 2

© 2025 Just 5 Kannada - Premium Website Designers Kalahamsa Infotech.