Thursday, April 24, 2025
  • About Us
  • Contact Us
  • Privacy Policy
Just 5 Kannada
No Result
View All Result
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
No Result
View All Result
Morning News
No Result
View All Result
Home Blog

ಶಿರಾ ವಿಧಾನಸಬೆ ಉಪಚುನಾವಣೆಯಲ್ಲಿ ಸ್ಪರ್ದೆ ಊಹಾಪೋಹ: ನಿಖಿಲ್ ಕುಮಾರಸ್ವಾಮಿ

News Desk by News Desk
August 16, 2020
in Blog
0
nikhil kumaraswamy
0
SHARES
0
VIEWS
Share on FacebookShare on Twitter

ಬೆಂಗಳೂರು,ಆ.15- ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇಲೆ ಕಣ್ಣಿಟ್ಟಿದ್ದೇನೆ ಎಂಬಂತೆ ವದಂತಿಗಳನ್ನು ಪುಂಖಾನುಪುಂಖವಾಗಿ ಹರಿಯ ಬಿಡಲಾಗುತ್ತಿದೆ ಇದು ಬರೀ ವದಂತಿ ಎಂದು ಚಿತ್ರನಟ ಹಾಗು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಸ್ಪಷ್ಟ ಪಡಿಸಿದ್ದಾರೆ.

ಶಾಸಕರಾಗಿದ್ದ ಬಿ. ಸತ್ಯನಾರಾಯಣ ಅವರು ಅಕಾಲಿಕ ನಿಧನರಾಗಿದ್ದ ರಿಂದ ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ಅನಿವಾರ್ಯವಾಗಿದೆ. ಹಾಗಂತ ಅಕಾಲಿಕವಾಗಿ ಖಾಲಿಬಿದ್ದ ಕ್ಷೇತ್ರಕ್ಕೆ ಜೋತುಬೀಳುವ ಜಾಯಮಾನ ನನ್ನದಲ್ಲವೇ ಅಲ್ಲ. ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ

READ ALSO

ಮಾರ್ಚ್ 22ರಂದು ‘ಕರ್ನಾಟಕ ಬಂದ್

ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

2018 ರ ವಿಧಾನಸಭಾ ಚುನಾವಣೆ ವೇಳೆ ಮೂರು ದಿನಗಳ ಕಾಲ ಶಿರಾ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಪಕ್ಷದ ಪರವಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ನಿಜ.ಹಾಗಂತ ಸತ್ಯ ನಾರಾಯಣ ಅವರ ಪಕ್ಷ ನಿಷ್ಠೆ ಮತ್ತು ಬದ್ಧತೆ ಪ್ರಶ್ನಾತೀತ.ಯಾವುದೇ ಆಮಿಷಗಳಿಗೆ ಬಲಿಯಾಗದೆ ಕೊನೆ ಉಸಿರಿರುವವರೆಗೂ ನಂಬಿದ ಪಕ್ಷವನ್ನು ಹೆಸರಿಗೆ ತಕ್ಕಂತೆ ‘ಸತ್ಯ”ವಾಗಿಸಿ ಕೊಂಡಿದ್ದರು ಎಂದಿದ್ದಾರೆ.

ಉಪಚುನಾವಣೆಗೆ ಯೋಗ್ಯ, ಸಮರ್ಥ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ. ಅವರ ಪರವಾಗಿಯೂ ಪಕ್ಷದ ಅಭ್ಯರ್ಥಿ ಪರ ಟೊಂಕಕಟ್ಟಿ ನಿಂತು ಪ್ರಚಾರ ಮಾಡಲಿದ್ದೇನೆ. ಇದರಲ್ಲಿ ಯಾರಿಗೂ ಎಳ್ಳಷ್ಟು ಸಂಶಯ ಬೇಡ. ನಾನು ಶಿರಾ ಉಪಚುನಾವಣೆಯ ಅಭ್ಯರ್ಥಿಯಾಗುವ ಕನಸು ಕಂಡವನಲ್ಲ. ಯಾವುದೇ ಕಾರಣಕ್ಕೂ ನಾನು ಶಿರಾದಲ್ಲಿ ಅಭ್ಯರ್ಥಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸತ್ಯನಾರಾಯಣ ಅವರ ‘ಚಿತೆ” ಆರುವ ಮುನ್ನವೇ ಉಪ ಚುನಾವಣೆ ಅಖಾಡಕ್ಕೆ ನನ್ನ ಹೆಸರನ್ನು ತೇಲಿ ಬಿಟ್ಟವರ ಬಗ್ಗೆ ಮರುಕವಿದೆ. ಇಂತಹ ಹೀನ ಸಂಸ್ಕೃತಿಯ ರಾಜಕೀಯ ಪರಂಪರೆ ನಮ್ಮದಲ್ಲ.ಶಿರಾ ಉಪಚುನಾವಣೆಗೆ ನನ್ನನ್ನು ಕಣಕ್ಕಿಳಿಸಲು ಒತ್ತಡಗಳಿವೆ ಎಂಬಂತೆ ಹಾಗೂ ರಾಜಕೀಯ ನೆಲೆ ಕಂಡುಕೊಳ್ಳಲು ಈ ಕ್ಷೇತ್ರವನ್ನೇ ‘ಚಿಮ್ಮು ಹಲಗೆ” ಮಾಡಿ ಕೊಳ್ಳುವ ಹವಣಿಕೆಯಲ್ಲಿದ್ದಾರೆ ಎಂಬ ವದಂತಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ರಾಜ್ಯ ಜಾತ್ಯಾತೀತ ಯುವ ಜನತಾದಳದ ಅಧ್ಯಕ್ಷನಾಗಿರುವ ನಾನು ಪಕ್ಷಕ್ಕಾಗಿ ದುಡಿಯುವಾಗ ‘ಹುದ್ದೆ”ಯ ಕಿರೀಟವನ್ನು ಬದಿಗಿರಿಸಿ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ದಣಿವರಿಯದೆ ದುಡಿಯುತ್ತೇನೆ. ಪಕ್ಷದ ನಿಷ್ಠಾವಂತ ಹಿರಿಯ-ಕಿರಿಯರ ನಿಸ್ವಾರ್ಥ ರಾಜಕೀಯ ನಿಷ್ಠೆಯೇ ಇದಕ್ಕೆ ಮೂಲ ಪ್ರೇರಣೆ ಎಂದಿದ್ದಾರೆ.

Tags: 2020byelectioncandidateconstituencynikhil kumarswamyshira

Related Posts

ಮಾರ್ಚ್ 22ರಂದು ‘ಕರ್ನಾಟಕ ಬಂದ್
Blog

ಮಾರ್ಚ್ 22ರಂದು ‘ಕರ್ನಾಟಕ ಬಂದ್

March 1, 2025
ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ
Blog

ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

October 24, 2024
ದಿಢೀರ್ ತುರ್ತು ನಿಯಮಗಳನ್ನು ಹಿಂಪಡೆದ ಶ್ರೀಲಂಕಾ…!
Blog

ದಿಢೀರ್ ತುರ್ತು ನಿಯಮಗಳನ್ನು ಹಿಂಪಡೆದ ಶ್ರೀಲಂಕಾ…!

September 25, 2024
ಜೋ ಬಿಡೆನ್ ಅವರ ಮೊಮ್ಮಗಳು ತನಗಿಂತ ಕಿರಿಯ ವ್ಯಕ್ತಿಯನ್ನು ಮದುವೆಯಾಗಲಿದ್ದಾಳೆ! ವೈಟ್ ಹೌಸ್ ನಲ್ಲಿ ಅದ್ಧೂರಿ ವಿವಾಹ ನಡೆಯಲಿದೆ.
Blog

ಜೋ ಬಿಡೆನ್ ಅವರ ಮೊಮ್ಮಗಳು ತನಗಿಂತ ಕಿರಿಯ ವ್ಯಕ್ತಿಯನ್ನು ಮದುವೆಯಾಗಲಿದ್ದಾಳೆ! ವೈಟ್ ಹೌಸ್ ನಲ್ಲಿ ಅದ್ಧೂರಿ ವಿವಾಹ ನಡೆಯಲಿದೆ.

September 25, 2024
ರಾಜ್ಯದಲ್ಲಿ ಜಾರಿಯಾಗುತ್ತಾ ಲಾಕ್ ಡೌನ್? ಏನಿದು ಕಲರ್ ಕೋಡ್ ಲಾಕ್ ಡೌನ್…
Blog

ರಾಜ್ಯದಲ್ಲಿ ಜಾರಿಯಾಗುತ್ತಾ ಲಾಕ್ ಡೌನ್? ಏನಿದು ಕಲರ್ ಕೋಡ್ ಲಾಕ್ ಡೌನ್…

September 25, 2024
Blog

ಮೈಸೂರಿನಲ್ಲಿ ಮನೆ ಬಾಗಿಲಿಗೆ ಲಸಿಕೆ..ಶಾಸಕ ರಾಮದಾಸ್ ವಿಶಿಷ್ಟ ಪ್ರಯತ್ನ..

June 20, 2021
Next Post

ಸಂಸತ್‌ ಭವನದಲ್ಲಿ ಅಗ್ನಿ ಅವಘಡ

Leave a Reply Cancel reply

Your email address will not be published. Required fields are marked *

POPULAR NEWS

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

September 25, 2024
ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

October 24, 2024

ದೇಶದ ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಣೆಗೆ ಕ್ರಮ

August 13, 2020
World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

September 25, 2024
ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

September 25, 2024

EDITOR'S PICK

ram ma

ಪ್ರಧಾನಿ ಮೋದಿ ಭಾಷಣಕ್ಕೆ ವ್ಯಂಗ್ಯವಾಡಿದ್ದ ರಾಹುಲ್ ಗಾಂಧಿಗೆ ರಾಮ್ ಮಾಧವ್ ತಿರುಗೇಟು!

August 16, 2020
ಆಕ್ಸ್‌ಫರ್ಡ್‌ನಿಂದ 42 ದಿನಗಳಲ್ಲೇ ಕೋವ್ಯಾಕ್ಸಿನ್‌ಗೆ ಸಿದ್ಧತೆ

ಆಕ್ಸ್‌ಫರ್ಡ್‌ನಿಂದ 42 ದಿನಗಳಲ್ಲೇ ಕೋವ್ಯಾಕ್ಸಿನ್‌ಗೆ ಸಿದ್ಧತೆ

September 25, 2024
ಲ್ಯಾಪ್‌ಟಾಪ್‌ ಪದೇ ಪದೇ ಹ್ಯಾಂಗ್‌ ಆಗುತ್ತಿದ್ದರೆ ಹೀಗೆ ಮಾಡಿ

ಲ್ಯಾಪ್‌ಟಾಪ್‌ ಪದೇ ಪದೇ ಹ್ಯಾಂಗ್‌ ಆಗುತ್ತಿದ್ದರೆ ಹೀಗೆ ಮಾಡಿ

September 25, 2024
ಜೋಗಕ್ಕೆ ಹೋದರೆ ಇದನ್ನು ತಪ್ಪದೇ ನೋಡಿ

ಜೋಗಕ್ಕೆ ಹೋದರೆ ಇದನ್ನು ತಪ್ಪದೇ ನೋಡಿ

September 25, 2024

About

ನಿಮ್ಮ ಧ್ವನಿ ನಮ್ಮ ಕರೆಗೆ ಸೇರುವುದಾದರೆ, ಕರ ಜೋಡಿಸಿ ಸ್ವಾಗತ ಕೋರುತ್ತೇವೆ.
ಇದು ” just 5 ಕನ್ನಡ”

Categories

  • Blog
  • Featured
  • Main Story
  • ಕ್ರೀಡೆ
  • ಟೆಕ್ನಾಲಜಿ
  • ದೇಶ
  • ಪ್ರವಾಸ
  • ರಾಜ್ಯ
  • ಲೇಖನ
  • ಲೈಫ್ ಸ್ಟೈಲ್
  • ವಿಶೇಷ
  • ಸಿನಿಮಾ

Recent Posts

  • ಮಾರ್ಚ್ ತಿಂಗಳ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳ ಪಟ್ಟಿ
  • ಮಾರ್ಚ್ 22ರಂದು ‘ಕರ್ನಾಟಕ ಬಂದ್
  • ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ
  • ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

© 2025 Just 5 Kannada - Premium Website Designers Kalahamsa Infotech.

No Result
View All Result
  • Homepages
    • Home Page 1
    • Home Page 2
  • National
  • Travel
  • Homepages
    • Home Page 1
    • Home Page 2

© 2025 Just 5 Kannada - Premium Website Designers Kalahamsa Infotech.