Thursday, April 24, 2025
  • About Us
  • Contact Us
  • Privacy Policy
Just 5 Kannada
No Result
View All Result
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
  •  
  • ರಾಜ್ಯ
  • ದೇಶ
  • ಕ್ರೀಡೆ
  • ಸಿನಿಮಾ
  • ಟೆಕ್ನಾಲಜಿ
  • ವಿಶೇಷ
  • ಪ್ರವಾಸ
  • ಲೈಫ್ ಸ್ಟೈಲ್
  • ಲೇಖನ
No Result
View All Result
Morning News
No Result
View All Result
Home ರಾಜ್ಯ

Mango Market: ಹಿಂದೂಗಳ ಬಳಿ ಹಣ್ಣು ಖರೀಸುವಂತೆ ಅಭಿಯಾನ. ಹಿಜಾಬ್, ಹಲಾಲ್, ಅಜಾನ್ ನಂತ್ರ ಮಾವು ಮಾರುಕಟ್ಟೆಗೆ ಕಾಲಿಟ್ಟ ವಿವಾದ.

News Desk by News Desk
September 25, 2024
in ರಾಜ್ಯ
0
Mango Market: ಹಿಂದೂಗಳ ಬಳಿ ಹಣ್ಣು ಖರೀಸುವಂತೆ ಅಭಿಯಾನ. ಹಿಜಾಬ್, ಹಲಾಲ್, ಅಜಾನ್ ನಂತ್ರ ಮಾವು ಮಾರುಕಟ್ಟೆಗೆ ಕಾಲಿಟ್ಟ ವಿವಾದ.
0
SHARES
0
VIEWS
Share on FacebookShare on Twitter

ಕಳೆದ ಮೂರು ವಾರಗಳಲ್ಲಿ ಹಿಂದೂ ಸಂಘಟನೆಗಳ ಪ್ರಚಾರದಿಂದ ಮತ್ತೊಂದು ಗುಂಪಿನ ಜನರು ಆಕ್ರೋಶಗೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಸಾಮಾನ್ಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಹೀಗಾಗಿ ಏಷ್ಯಾದಲ್ಲೇ ಅತಿ ದೊಡ್ಡ ಮಾವು ಮಾರುಕಟ್ಟೆ ಹೊಂದಿರುವ ಶ್ರೀನಿವಾಸಪುರದಲ್ಲಿ ಮಾವಿನ ಭಯ ಕಾಡುತ್ತಿದೆ.

ಶ್ರೀನಿವಾಸಪುರ ತಾಲೂಕಿನಲ್ಲಿ ದೇಶದಲ್ಲಿ ಅತೀ ಹೆಚ್ಚು ಮಾವು ಬೆಳೆಯಲಾಗುತ್ತದೆ, 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇಲ್ಲಿಯ ಮಾರುಕಟ್ಟೆಯಲ್ಲಿ ವರ್ಷವೊಂದಕ್ಕೆ 5 ಲಕ್ಷ ಟನ್ ಮಾವು ವಹಿವಾಟು ನಡೆಯುತಿದ್ದು, 200  ಕೋಟಿಗಿಂತಲೂ ಹೆಚ್ಚು ಹಣದ ಮಾವು ವ್ಯಾಪಾರ ನಡೆಯುತ್ತದೆ.

READ ALSO

ಮಾರ್ಚ್ 22ರಂದು ‘ಕರ್ನಾಟಕ ಬಂದ್

ಬೀದರ್ ಕೋಟೆ । ಐತಿಹಾಸಿಕ ಪರಂಪರೆಯ ಬೀದರ್ | Bidar Fort

ಇದೀಗ ಮಾವು ಬೆಳೆದ ರೈತರು ಕೇವಲ ಹಿಂದೂ ವ್ಯಾಪಾರಿಗಳ ಬಳಿ ಮಾತ್ರ ಮಾರಾಟ ಮಾಡಿ, ಮುಸ್ಲಿಂ ವ್ಯಾಪಾರಿ ಬಳಿ ಹೋಗಬೇಡಿ ಎನ್ನುವ ಸಾಮಾಜಿಕ  ಜಾಲತಾಣದ ಸಂದೇಶವೊಂದು ಹರಿದಾಡುತ್ತಿದೆ. ಆದರೆ ಈ ವಿವಾದ ಇನ್ನೂ ಕೋಲಾರ ಜಿಲ್ಲೆಗೆ ಕಾಲಿಟ್ಟಿಲ್ಲ, ಆದರೂ ಜಿಲ್ಲೆಯ ಮಾವು ವ್ಯಾಪಾರಿ, ಬೆಳೆಗಾರ, ಮತ್ತು ಸಾರ್ವಜನಿಕರಲ್ಲಿ‌ ಚರ್ಚೆ ಆರಂಭವಾಗಿದ್ದು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ವ್ಯಾಪಾರಿಗಳು ಹೇಳೋದೇನು?

ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಹಲವಾರು ವರ್ಷಗಳಿಂದ ವಹಿವಾಟು ನಡೆಸುತ್ತಿದ್ದಾರ., ಇಲ್ಲಿ ತಾರತಮ್ಯ ಎಂಬುದಿಲ್ಲ, ರೈತರು ಮತ್ತು ವ್ಯಾಪಾರಿಗಳು‌ ಅನ್ಯೋನ್ಯವಾಗಿದ್ದು, ಇದನ್ನು ಕೆಡಿಸಬೇಡಿ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾವಿನ ಮಾರುಕಟ್ಟೆಯಲ್ಲಿ ಒಟ್ಟು ೧೨೦ ಮಂಡಿಗಳಿದ್ದು, ಇದರಲ್ಲಿ ೮೦ ಜನ ಮುಸ್ಲಿಮರು , ಉಳಿದ ೪೦ ಮಂದಿ
ಹಿಂದೂ ವ್ಯಾಪಾರಿಗಳಾಗಿರುತ್ತಾರೆ . ಮಾವು ಸುಗ್ಗಿ ವೇಳೆ ಮಾವುಗಳನ್ನ ಕಟಾವು ಮಾಡಿ,
ರೈತರು ಇಲ್ಲಿಗೆ ತಂದಾಕ್ಷಣ , ವ್ಯಾಪಾರಿಗಳು ದಲ್ಲಾಳಿಗಳ ಮುಂದೆ ಮಾರಾಟ ಮಾಡಿ, ಕಮಿಷನ್ ಹಣ ತೆಗೆದುಕೊಳ್ಳುತ್ತಾರೆ.

ನಂತರ ದೇಶದ ನಾನಾ ರಾಜ್ಯಗಳಿಗೆ ಮಾವು ರವಾನೆ ಮಾಡುತಿದ್ದಾರೆ. ಇದರಲ್ಲಿ ಮುಖ್ಯವಾಗಿ ಕೋಲ್ಕತ್ತಾ, ಮಹಾರಾಷ್ಟ್ರ, ಗೋವಾ , ಗುಜರಾತ್ , ಉತ್ತರ ಪ್ರದೇಶ , ದೆಹಲಿ , ಜಮ್ಮು ಕಾಶ್ಮೀರಕ್ಕೂ ಈ ಮಾವನ್ನು ರವಾನೆ ಮಾಡುತ್ತಾರೆ.

ಶ್ರೀನಿವಾಸಪುರ ಮಾವಿಗೆ ಹೆಚ್ಚು ಬೇಡಿಕೆ

ಶ್ರೀನಿವಾಸಪುರ ಮಾವಿಗೆ ದೇಶದೆಲ್ಲೆಡೆ ಎಲ್ಲಿಲ್ಲದ ಬೇಡಿಕೆಯಿದ್ದು, ತೋತಾಪುರಿ, ರಸಗುಲ್ಲ, ಬೇನಿಶಾ, ನೀಲಂ, ಮಲ್ಲಿಕಾ, ಮಲಗುವಾ ಮಾವಿಗೆ ಹೆಚ್ಚಿನ ಬೇಡಿಕೆಯಿದೆ.

ಇನ್ನು ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ  ಮುಸ್ಲಿಂ ವ್ಯಾಪಾರಿಗಳು ಹೆಚ್ಚಿರಲು ಕಾರಣಗಳೇನು ಎನ್ನುವುದನ್ನ ನೋಡುವುದಾದರೆ,  ದೇಶದ ವಿವಿಧ ರಾಜ್ಯಗಳಲ್ಲಿ ಹಣ್ಣು ವ್ಯಾಪಾರದಲ್ಲಿ ಮುಸ್ಲಿಂ ದಲ್ಲಾಳಿಗಳೇ ಹೆಚ್ಚು. ಹೀಗಾಗಿ  ದಲ್ಲಾಳಿಗಳ ಸುಲಭ ಸಂಪರ್ಕ  ವ್ಯಾಪಾರಿಗಳು ಹೊಂದಿದ್ದಾರೆ.

ಮಾವು ಮಾರುಕಟ್ಟೆಯಲ್ಲಿ ವ್ಯಾಪಾರಿಗಳೇ ನೇರವಾಗಿ ಕೊಳ್ಳುವ ಕಾರಣ, ಸ್ಥಳದ್ಲೇ ಹಣದ ವಹಿವಾಟು ನಡೆಯುತ್ತಿದೆ, ಮ್ಯಾಂಗೊ ಮಾರುಕಟ್ಟೆ ವಿವಾದದ ಬಗ್ಗೆ  ಮಾತನಾಡಿರೊ ಮುಸ್ಲಿಂ ವ್ಯಾಪಾರಿಗಳು, ವ್ಯಾಪಾರದಲ್ಲಿ ಧರ್ಮ ಮುಖ್ಯವಲ್ಲ. ಉತ್ತಮ ಒಡನಾಟ, ಹಣಕಾಸಿನ ವ್ಯಾಪಾರ ಮುಖ್ಯ. ಲಾಭ ನಷ್ಟದಲ್ಲೂ ರೈತರಿಗೆ ನಾವು ಹಣ  ನೀಡಿದ್ದೇವೆ ಎನ್ನುತ್ತಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಮಾವು ಬೆಳೆಗಾರರು, ಹಿಂದೂ ವ್ಯಾಪಾರಿಗಳು ಮಾರಾಟ ಕೇಂದ್ರ ತೆರೆಯಲಿ, ಆದರೆ ನಮಗೆ ಯಾವ ಧರ್ಮ ಬೇದಬಾವ ಇಲ್ಲ ಎಂದಿದ್ದಾರೆ, ಇನ್ನು ಹಿಂದೂಪರ ಸಂಘಟನೆಯವರು ಕೇವಲ ಪೋಸ್ಟ್ ಹಾಕೋದು ಬಿಟ್ಟು, ಸ್ಥಳಕ್ಕೆ ಬಂದು ಕೆಲಸ ಮಾಡಲಿ ಎಂದು ರೈತರಿಗೆ ಸವಾಲು ಹಾಕಿದ್ದಾರೆ.

ಒಟ್ಟಿನಲ್ಲಿ ಮಾವು ಮಾರುಕಟ್ಟೆ ಆರಂಭಕ್ಕೆ ಇನ್ನೂ ಒಂದು ತಿಂಗಳಿದ್ದು ವಿವಾದ ಅಲ್ಲಿಯವರೆಗೆ ಮುಂದುವರೆವ ಸಾಧ್ಯತೆಯಿದೆ, ವಿವಾದದ ಕಹಿ ಮರೆಯಾಗಿ ಮಾವಿನ ಸಿಹಿ ಮಾತ್ರ ಇಲ್ಲಿಂದ ಹೊರಬೀಳಲಿ ಎಂಬುದು ಶ್ರೀನಿವಾಸಪುರ ಮಾವು ಬೆಳೆಗಾರರು ಹಾಗು ಮಂಡಿ ಮಾಲೀಕರ ಆಗ್ರಹ.

 

Related Posts

ಮಾರ್ಚ್ 22ರಂದು ‘ಕರ್ನಾಟಕ ಬಂದ್
Blog

ಮಾರ್ಚ್ 22ರಂದು ‘ಕರ್ನಾಟಕ ಬಂದ್

March 1, 2025
ಬೀದರ್ ಕೋಟೆ । ಐತಿಹಾಸಿಕ ಪರಂಪರೆಯ ಬೀದರ್ | Bidar Fort
Featured

ಬೀದರ್ ಕೋಟೆ । ಐತಿಹಾಸಿಕ ಪರಂಪರೆಯ ಬೀದರ್ | Bidar Fort

September 25, 2024
ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort
Featured

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

September 25, 2024
History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ
Featured

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

September 25, 2024
Vijyanagara: ಎಸಿ ಸ್ಫೋಟ : ಇಬ್ಬರು ಮಕ್ಕಳು ಸೇರಿ ನಾಲ್ವರು ಸಜೀವ ದಹನ.
ರಾಜ್ಯ

Vijyanagara: ಎಸಿ ಸ್ಫೋಟ : ಇಬ್ಬರು ಮಕ್ಕಳು ಸೇರಿ ನಾಲ್ವರು ಸಜೀವ ದಹನ.

September 25, 2024
ರಾಜ್ಯ

ಹಿಂದೂ ಅಂತ ನಂಬಿಸಿ ಲವ್ ಜಿಹಾದ್!

April 7, 2022
Next Post
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬ | ತೆಲುಗು ನಟನ ಮುಂಬರುವ ಚಲನಚಿತ್ರಗಳ ಬಗ್ಗೆ ತಿಳಿದುಕೊಳ್ಳಿ.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬ | ತೆಲುಗು ನಟನ ಮುಂಬರುವ ಚಲನಚಿತ್ರಗಳ ಬಗ್ಗೆ ತಿಳಿದುಕೊಳ್ಳಿ.

POPULAR NEWS

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

History of Hampi | ಹಂಪಿಯ ಇತಿಹಾಸ ಹಾಗು ಮಾಹಿತಿ

September 25, 2024
ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ

October 24, 2024

ದೇಶದ ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಣೆಗೆ ಕ್ರಮ

August 13, 2020
World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

World Heart Day 2022 | ವಿಶ್ವ ಹೃದಯ ದಿನ 2022: ಹೃದಯ ಸಂಬಂಧಿ ಖಾಯಿಲೆಗಳನ್ನು ತಡಗಟ್ಟಲು ಕೆಲವು ಮುಖ್ಯ ಮಾರ್ಗಗಳು

September 25, 2024
ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

ಚಿತ್ರದುರ್ಗದಲ್ಲಿ ನೀವು ನೋಡಲೇಬೇಕಾದ ತಾಣಗಳಿವು | Chitradurga Fort

September 25, 2024

EDITOR'S PICK

ಲ್ಯಾಪ್‌ಟಾಪ್‌ ಪದೇ ಪದೇ ಹ್ಯಾಂಗ್‌ ಆಗುತ್ತಿದ್ದರೆ ಹೀಗೆ ಮಾಡಿ

ಲ್ಯಾಪ್‌ಟಾಪ್‌ ಪದೇ ಪದೇ ಹ್ಯಾಂಗ್‌ ಆಗುತ್ತಿದ್ದರೆ ಹೀಗೆ ಮಾಡಿ

September 25, 2024

ರಾಜಸ್ಥಾನ ಸರ್ಕಾರದ ವಿರುದ್ಧ ನಾಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ನಿರ್ಧಾರ

August 13, 2020
ಅಕ್ಷರ ಕಲಿಸಿದವ – ಅಕ್ಕರೆ ಕಾಣದಾದ!

ಅಕ್ಷರ ಕಲಿಸಿದವ – ಅಕ್ಕರೆ ಕಾಣದಾದ!

September 25, 2024
dhoni

ಧೋನಿ ಜೇಬುಗಳ್ಳರಿಗಿಂತ ಚಾಲಾಕಿ ಎಂದ ರವಿಶಾಸ್ತ್ರಿ

August 17, 2020

About

ನಿಮ್ಮ ಧ್ವನಿ ನಮ್ಮ ಕರೆಗೆ ಸೇರುವುದಾದರೆ, ಕರ ಜೋಡಿಸಿ ಸ್ವಾಗತ ಕೋರುತ್ತೇವೆ.
ಇದು ” just 5 ಕನ್ನಡ”

Categories

  • Blog
  • Featured
  • Main Story
  • ಕ್ರೀಡೆ
  • ಟೆಕ್ನಾಲಜಿ
  • ದೇಶ
  • ಪ್ರವಾಸ
  • ರಾಜ್ಯ
  • ಲೇಖನ
  • ಲೈಫ್ ಸ್ಟೈಲ್
  • ವಿಶೇಷ
  • ಸಿನಿಮಾ

Recent Posts

  • ಮಾರ್ಚ್ ತಿಂಗಳ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳ ಪಟ್ಟಿ
  • ಮಾರ್ಚ್ 22ರಂದು ‘ಕರ್ನಾಟಕ ಬಂದ್
  • ಪ್ರೀ ವೆಡ್ಡಿಂಗ್ ಗೊಂದು ಹೊಸ ಟಚ್…ವೈರಲ್ ಆಯ್ತು ನವಜೋಡಿಯ ನರ್ತನ
  • ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

© 2025 Just 5 Kannada - Premium Website Designers Kalahamsa Infotech.

No Result
View All Result
  • Homepages
    • Home Page 1
    • Home Page 2
  • National
  • Travel
  • Homepages
    • Home Page 1
    • Home Page 2

© 2025 Just 5 Kannada - Premium Website Designers Kalahamsa Infotech.